ಅಯೋಧ್ಯೆಯಲ್ಲಿ ಸದ್ಯದಲ್ಲಿಯೇ ನಿರ್ಮಾಣವಾಗಲಿದೆ ಬೀಚ್
ಅಯೋಧ್ಯೆ ಸದ್ಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ. ನಿತ್ಯಲೂ ಸಾವಿರಾರು ಪ್ರವಾಸಿಗರು ರಾಮನೂರಿನತ್ತ ಧಾವಿಸಿ ಬರುತ್ತಿದ್ದಾರೆ.
ಅಲ್ಲಿಗೆ ಬರುವ ಭಕ್ತರು ರಾಮನನ್ನು ಇಂದಿಗೂ ಬೆರಗುಗಣ್ಣುಗಳಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.
ಅದೆಷ್ಟರ ಮಟ್ಟಿಗೆ ರಾಮನ ಭಕ್ತಿಯಲ್ಲಿ ಜನ ಮಿಂದೇಳುತ್ತಿದ್ದಾರೆ ಅಂತಂದ್ರೆ ಮಂದಿರ ಉದ್ಘಾಟನೆಯಾಗಿ ವರ್ಷದೊಳಗೆ ಅಯೋಧ್ಯೆಗೆ 50 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ.
ಅಲ್ಲದೇ ದೇವಾಲಯದ ಹುಂಡಿಯಲ್ಲಿ 25 ಕೋಟಿ ಕಾಣಿಕೆ ಹುಂಡಿ ಸಂಗ್ರಹವಾಗಿದ್ದು, 25 ಕೆಜಿ ಬೆಳ್ಳಿ ಹಾಗೂ 10 ಕೆಜಿ ಚಿನ್ನ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೂ ರಾಮಬಲ ಬದಂತಾಗಿದೆ.
ಅಲ್ಲಿಯೂ ಹೊಸ ಕಳೆಯೇ ಬಂದಿದ್ದು, ಈ ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ಬಲ ಪಡಿಸಲು ಇನ್ನೂ ಒಂದು ಹೆಜ್ಜೆಯನ್ನು ಅಲ್ಲಿನ ಸರ್ಕಾರ ಇಟ್ಟಿದ್ದು, ಅಯೋಧ್ಯೆಯಲ್ಲಿ ಸದ್ಯದಲ್ಲಿಯೇ ಬೀಚ್ ಕೂಡ ಸೃಷ್ಟಿಯಾಗಲಿದೆ.
ಹೌದು, ಅಯೋಧ್ಯೆ ತನ್ನದೇ ಆದ ಬೀಚ್ ಹೊಂದಲು ಸಿದ್ಧವಾಗಿದೆ.
ಮೂಲಗಳ ಪ್ರಕಾರ, ಉತ್ತರ ಪ್ರದೇಶದ ವಸತಿ ಇಲಾಖೆಯು ಅಯೋಧ್ಯೆಯ ಸರಯು ನದಿಯ ದಡದಲ್ಲಿ ಒಂದಾದ ರಾಮ್ ಕಿ ಪೈಡಿಯಲ್ಲಿ ಚೌಪಾಟಿ ಸ್ಥಾಪಿಸುವ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದೆ.
ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಸರಯೂ ನದಿ ತೀರವನ್ನು ರೋಮಾಂಚಕ ಸ್ಥಳವಾಗಿ ಪರಿವರ್ತಿಸಲು ಸಿದ್ಧವಾಗಿದೆ.
ಅಲ್ಲದೇ ದೇಶದ ಇತರ ಬೀಚ್ಗಳಲ್ಲಿರುವಂತೆ ಇಲ್ಲಿಯೂ ಆಹಾರ ಪದಾರ್ಥಗಳನ್ನು ಕೂಡ ಜನರಿಗೆ ನೀಡುವುದಕ್ಕೆ ಚಿಂತನೆ ಕೂಡ ನಡೆದಿದೆಯಂತೆ.
ರಾಮ್ ಕಿ ಪೈಡಿಯಲ್ಲಿ ಆಹಾರ ಬಂಡಿಗಳಿಗಾಗಿ ಬಹು ತಾತ್ಕಾಲಿಕ ರಚನೆಗಳು ಮತ್ತು ಗೊತ್ತುಪಡಿಸಿದ ವಲಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ.
ಈ ಯೋಜನೆಯು ಅಂದಾಜು ನಾಲ್ಕರಿಂದ ಐದು ಕೋಟಿಯ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.
ಇದು ಮೂಲಭೂತ ಮೂಲಸೌಕರ್ಯ, ನೈರ್ಮಲ್ಯ, ವಿದ್ಯುದ್ದೀಕರಣ, ಅಗ್ನಿಶಾಮಕ, ನೀರು ಸರಬರಾಜು, ಪಾರ್ಕಿಂಗ್ ವಲಯಗಳು, ತೋಟಗಾರಿಕೆ ಮತ್ತು ಸುಸಜ್ಜಿತ ಪ್ರವೇಶ ಮಾರ್ಗದಂತಹ ವಿವಿಧ ಅಂಶಗಳನ್ನು ಒಳಗೊಂಡಿದೆ.
ನದಿ ತೀರದ ವಾತಾವರಣವನ್ನು ಆರಾಮವಾಗಿ ಆನಂದಿಸಬಹುದು.
ಈ ಪ್ರಯತ್ನವು ಸರಯೂ ನದಿಯ ಉದ್ದಕ್ಕೂ ಮನರಂಜನಾ ಸ್ಥಳಗಳನ್ನು ಹೆಚ್ಚಿಸಲು ಅಯೋಧ್ಯೆಯಲ್ಲಿನ ನಾಗರಿಕ ಮಂಡಳಿಯ ವಿಶಾಲ ಯೋಜನೆಯ ಭಾಗವಾಗಿದೆ.
ಇನ್ನು ಈ ಬೀಚ್ನಲ್ಲಿ 50 ಜನರಿಗೆ ಕುಳಿತುಕೊಳ್ಳುವುದಕ್ಕೆ ಅವಕಾಶಗಳನ್ನೂ ಕೂಡ ಕಲ್ಪಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.