ಶರಾವತಿಯ ದಡದಲ್ಲಿ ಚತುರ್ಮುಖ ಬಸದಿ
ಅರಣ್ಯ ಇಲಾಖೆಯ (Forest department)ವತಿಯಿಂದ ಒಂದು ದಿನನ ಕ್ಯಾಂಪ್ ( One day camp )ಅನ್ನು ಏರ್ಪಡಿಸಲಾಗಿತ್ತು. ನಮ್ಮ ತರಗತಿಯ ಮಕ್ಕಳೆಲ್ಲರೂ ಹೊರಟೆವು. ಭಟ್ಕಳದ(Bhatkal )ಸಾಲು ಮರದ ತಿಮ್ಮಕ್ಕನ ಪಾರ್ಕ್ ಗೆ ಭೇಟಿ ನೀಡಿ ಅಲ್ಲಿರುವ ಗಿಡ ಮರಗಳ ಬಗ್ಗೆ ತಿಳಿದು ನಂತರ ಹೊರಟಿದ್ದು ಗೇರುಸೊಪ್ಪದ (Gerusoppa) ಸಿಂಗಳಿಕಾ ಪಾರ್ಕ್ಗೆ ( Singalila National Park).
ಅಲ್ಲಿ ನಮಗೆ ಉಳಿಯಲು ವ್ಯವಸ್ಥೆಯನ್ನು ಮಾಡಿದ್ದರು. ಗಿಡ, ಮರ, ಪ್ರಾಣಿಗಳ ಬಗ್ಗೆ 2 ಗಂಟೆಯ ಉಪನ್ಯಾಸವನ್ನು ನೀಡಿ ನಂತರ ಪಾರ್ಕ್ ನಲ್ಲಿ ಆಟವಾಡಲು ಬಿಟ್ಟರು. ರಾತ್ರಿ ಕ್ಯಾಂಪ್ ಫೈರ್ ನೊಂದಿಗೆ ಎಲ್ಲರೂ ಊಟವನ್ನು ಮುಗಿಸಿದೆವು. ಮಾರನೇ ದಿನ ಗೊತ್ತು ಮಾಡಿದಂತೆ ಎಲ್ಲರೂ 5 ಗಂಟೆಗೆ ಎದ್ದು ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಹೋದೆವು.
ಚಿಟ್ಟೆ ತಜ್ಞರಾದ ಚತುರ್ವೇದಿ ಸರ್ ನಮಗೆ ಮಾರ್ಗದರ್ಶನ ನೀಡುವುದರ ಮೂಲಕ ನಮಗೆ ವಿವಿಧ ಬಗೆಯ ಚಿಟ್ಟೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆವು. ಹತ್ತು ಹಲವಾರು ಜಾತಿಯ ಚಿಟ್ಟೆ, ಹಕ್ಕಿ, ಕ್ರಿಮಿ ಕೀಟಗಳ ಬಗ್ಗೆ ತಿಳಿದುಕೊಂಡೆವು. ನಂತರ ಗೇರುಸೊಪ್ಪ ಡ್ಯಾಮ್ ಗೆ ಭೇಟಿ ನೀಡಿದೆವು.. ಅದರ ಬಳಿಕ ಸ್ವಲ್ಪ ದೂರ ನಡೆದುಕೊಂಡು ಹೋಗಿ ಚತುರಮುಖ ಜೈನ ಬಸಿದಿಯನ್ನು ತಲುಪಿದೆವು.
ಚತುರ್ಮುಖ ಬಸದಿ( Chaturmukha Basadi ) ಗೇರುಸೊಪ್ಪಾದಲ್ಲಿರುವ ಪ್ರಸಿದ್ಧ ಜೈನ ( Jain) ಕೇಂದ್ರವಾಗಿದೆ. ದೇವಾಲಯವು ಪಶ್ಚಿಮ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಅಡ್ಡ-ಆಕಾರದ ಚತುರ್ಮುಖ ರಚನೆಯಾಗಿದೆ . ದೇವಾಲಯವು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿರುವ ಕೇಂದ್ರ ದೇಗುಲವನ್ನು ಹೊಂದಿದೆ ಮತ್ತು ಜಿನ, ಋಷಭನಾಥ , ಅಜಿತಾನಾಥ , ಸಂಭವನಾಥ ಮತ್ತು ಅಭಿನಂದನನಾಥ ರ (Rishabhanatha, Ajitanatha, Sambhavanatha and Abhinandananatha )ಜೀವನ ಗಾತ್ರದ ಚತುರ್ಮುಖ ವಿಗ್ರಹವನ್ನು ನಾಲ್ಕು ಕಾರ್ಡಿನಲ್ ದಿಕ್ಕುಗಳಿಗೆ ಎದುರಿಸುತ್ತಿದೆ.
ನೀವು ಇದನ್ನು ಓದಬಹುದು : ಸ್ವದೇಶ್ ದರ್ಶನ 2.0 ಅಡಿಯಲ್ಲಿ ಅಭಿವೃದ್ಧಿಗೆ ಆಯ್ಕೆಯಾಗಿವೆ ಭಾರತದ 57 ತಾಣಗಳು
ದೇವಾಲಯದ ಪ್ರತಿಯೊಂದು ಸಭಾಂಗಣವು ನಾಲ್ಕು ಕಂಬಗಳು ಚದರ ತಳಹದಿಗಳಿಂದ ಮತ್ತು ಕಮಲಗಳ ಕೆತ್ತನೆಗಳೊಂದಿಗೆ ಮೇಲಿರುವ ಆವರಣಗಳಿಂದ ಬೆಂಬಲಿತವಾಗಿದೆ. ದೇವಾಲಯದ ಪ್ರವೇಶದ್ವಾರದ ಎರಡೂ ಬದಿಯಲ್ಲಿ ಎತ್ತರದ ಕಿರೀಟವನ್ನು ಧರಿಸಿರುವ ಮತ್ತು ಪ್ರತಿಯೊಂದೂ ಒಂದು ಕೋಲು ಮತ್ತು ನಾಗರವನ್ನು ಹಿಡಿದಿರುವ ದ್ವಾರಪಾಲನ ಅಲಂಕೃತ ವಿಗ್ರಹಗಳಿವೆ. ಮೂರು ದ್ವಾರಗಳಲ್ಲಿ ಕಮಲದ ಭಂಗಿಯಲ್ಲಿ ತೀರ್ಥಂಕರನ ವಿಗ್ರಹಗಳು ಮತ್ತು ನಾಲ್ಕನೆಯ ಮೇಲೆ ಗಜಲಕ್ಷ್ಮಿಯ ಚಿತ್ರವಿದೆ . ದೇವಾಲಯದ ಒಳಗೆ ಜ್ವಾಲಾಮಾಲಿನಿಯ ಗುಡಿ ಇದೆ . ದೇವಾಲಯವು ವೀರಭದ್ರ ಮತ್ತು ಗಣೇಶನ ಚಿತ್ರಗಳನ್ನು ಸಹ ಪ್ರತಿಷ್ಠಾಪಿಸುತ್ತದೆ .
ವಿಜಯನಗರ ಸಾಮ್ರಾಜ್ಯದ ಸಾಳುವ ರಾಜವಂಶದ ಆಳ್ವಿಕೆಯಲ್ಲಿ 1409-1610 ಅವಧಿಯಲ್ಲಿ ಗೇರುಸೊಪ್ಪಾ ಪ್ರದೇಶವು ಜೈನ ರಾಜಧಾನಿಯಾಗಿತ್ತು .ಗೇರುಸೊಪ್ಪಾದಲ್ಲಿರುವ ಚತುರ್ಮುಖ ಬಸದಿ ದೇವಾಲಯವು ವಿಶಿಷ್ಟವಾದ ಮತ್ತು ಐತಿಹಾಸಿಕವಾಗಿ ಮಹತ್ವದ ಜೈನ ದೇವಾಲಯವಾಗಿದೆ. ಇದರ ವಾಸ್ತುಶಿಲ್ಪದ ಸೌಂದರ್ಯ ಮತ್ತು ಸಂಕೀರ್ಣವಾದ ಕೆತ್ತನೆಗಳು ಇದನ್ನು ಜೈನರಿಗೆ ಜನಪ್ರಿಯ ಯಾತ್ರಾ ಸ್ಥಳವನ್ನಾಗಿ ಮಾಡುತ್ತದೆ ಮತ್ತು ಈ ಪ್ರದೇಶದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿಯ ಮೌಲ್ಯಯುತವಾದ ಮೂಲವಾಗಿದೆ. ದೇವಾಲಯವು ಸಂರಕ್ಷಿತ ಸ್ಮಾರಕವಾಗಿದೆ.
ತಲುಪುವ ಮಾರ್ಗ : ಇದು ಕಾಡಿನ ಮದ್ಯದಲ್ಲಿ ಇರುವುದರಿಂದ ಅಷ್ಟೊಂದು ಪ್ರವಾಸಿಗರ ಕಣ್ಣಿಗೆ ಬಿದ್ದಿಲ್ಲ. ಹೊನ್ನಾವರದಿಂದ ಗೇರುಸೊಪ್ಪ ಕ್ಕೆ ಬಸ್ ವ್ಯವಸ್ಥೆಗಳಿವೆ.. ಅಲ್ಲಿಂದ ಆಟೋ ರಿಕ್ಷಾದ ವ್ಯವಸ್ಥೆಗಳಿವೆ. ಸ್ಥಳೀಯಲ್ಲಿ ಮಾರ್ಗವನ್ನು ತಿಳಿದುಕೊಂಡು ಮುಂದೆ ಸಾಗುವುದು ಉತ್ತಮವಾಗಿದೆ.
ಕೆ. ಎಂ. ಪವಿತ್ರಾ
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.