ಕಾಶ್ಮೀರದಿಂದ ಕನ್ಯಾಕುಮಾರಿಗೆ 180 ದಿನದಲ್ಲಿ 5,000 ಕಿಮೀ ನಡೆದ ಶುಭಮ್
ಇಪ್ಪತ್ತಾರು ವರ್ಷದ ಈ ವೃತ್ತಿಪರ ಪಯಣಿಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸುಮಾರು ೫,೦೦೦ ಕಿಮೀಯನ್ನು ೧೮೦ ದಿನದಲ್ಲಿ ಒಂಟಿಯಾಗಿ ಕಾಲ್ನಡಿಗೆಯಲ್ಲಿ ತಲುಪಿದ್ದಾರೆ. ಈ ಕೆಚ್ಚೆದೆಯ ಸಾಧಕನ ಹೆಸರು ಶುಭಮ್ ಧರ್ಮಸ್ಕು. ಈ ಒಂಟಿಪಯಣಿಗನ ಸವಾಲಿನ ಸ್ಪೂರ್ತಿಗಾಥೆಯಿದು!
- ಮಧುರಾ ಎಲ್ ಭಟ್
ಎಲ್ಲರೂ ಸಾಮಾನ್ಯವಾಗಿ ಪ್ರಯಾಣವನ್ನು ಇಷ್ಟಪಡುವವರೇ. ಆದರೆ ಅವರಲ್ಲಿ ಕೆಲವರು ತಾವು ಮಾಡುವ ಪ್ರಯಾಣವನ್ನೇ ತಮ್ಮ ಜೀವನವನ್ನಾಗಿಸಿಕೊಂಡು ಅದರಲ್ಲಿಯೆ ಸಾಧನೆಯನ್ನು ಮಾಡುತ್ತಾರೆ. ಈ ರೀತಿ ಪ್ರಯಾಣವನ್ನು ಇಷ್ಟಪಟ್ಟು ಸಾಧನೆ ಮಾಡಿದವರ ಪಟ್ಟಿಗಳ ಹೆಸರಿಗೆ ಶುಭಮ್ ಧರ್ಮಸ್ಕು ಕೂಡಾ ಸೇರುತ್ತಾರೆ.
ಇವರು 26ನೇ ವಯಸ್ಸಿನಲ್ಲಿಯೇ ಕಾಶ್ಮೀರದಿಂದ ಕನ್ಯಾಕುಮಾರಿಗೆ ಏಕವ್ಯಕ್ತಿ ನಡಿಗೆಯ ಪ್ರಯಾಣವನ್ನು ಮಾಡುವುದರ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ.
ಆದರೆ ಇವರು ಈ ಸಾಧನೆ ಮಾಡಿರುವುದರ ಹಿಂದೆ ಹಲವಾರು ನೋವು , ಸೋಲು, ದುಃಖ, ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದ್ದಾರೆ. ಜನರಿಂದ ಪಡೆದ ಅನುಕೂಲತೆಯಿಂದ ವಂಚನೆಗೆ ಒಳಗಾಗಿದ್ದಾರೆ, ಒಂಟಿತನ ಮತ್ತು ಇಕ್ಕಟ್ಟಾದ ರಸ್ತೆಗಳನ್ನುದಾಟಿದ್ದಾರೆ.
ಏಕೆಂದರೆ ಛಲವನ್ನು ಬಿಡದೆ ಜೀವನವನ್ನು ಸಾಗಿಸುವುದು ಇವರ ಏಕೈಕ ಮಂತ್ರವಾಗಿದೆ. ಹಾಗಾಗಿ ಇವೆಲ್ಲವುಗಳೊಂದಿಗೆ, ಜೀವಮಾನದ ಅನುಭವಗಳನ್ನು ಸಂಗ್ರಹಿಸಿ ಅಸಾಧ್ಯ ಅಥವಾ ಸವಾಲು ಎಂದು ಪರಿಗಣಿಸಲ್ಪಟ್ಟದ್ದನ್ನು ಸಾಧಿಸಿ ತೋರಿಸಿದ್ದಾರೆ.
ಇನ್ನೂ ಇವರು ಮಾಡಿದ ಸಾಧನೆ ಮತ್ತು ಇವರ ಬಗ್ಗೆ ತಿಳಿಯುತ್ತಾ ಹೋಗುವುದಾದರೆ ಶುಭಮ್ ಧರ್ಮಸ್ಕು ಇವರು ಟೆಡ್ಎಕ್ಸ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸುಸ್ಥಿರ ಸಾಹಸ ಪ್ರವಾಸೋದ್ಯಮ ಕಂಪನಿಯನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕ, ಚಲನಚಿತ್ರ ನಿರ್ಮಾಪಕ ಮತ್ತು ವೃತ್ತಿಪರ ಪ್ರಯಾಣಿಕರಾಗಿದ್ದಾರೆ.
ಧಾರ್ಮಿಕವಾಗಿ ಸುಸ್ಥಿರವಾಗಿ ಪ್ರಯಾಣಿಸುವುದು, ಪರಿಸರದ ಬಗ್ಗೆ ಕಾಳಜಿ ವಹಿಸುವುದು, ಪ್ರಯಾಣದ ದಾರಿಯಲ್ಲಿ ಸಿಗುವ ವ್ಯಕ್ತಿಗಳನ್ನೂ ಪರಿಚಯಸ್ಥರನ್ನಾಗಿ ಮಾಡಿಕೊಳ್ಳುವುದು , ಕನಿಷ್ಠ ಜೀವನಶೈಲಿಯನ್ನು ಅನುಸರಿಸುವುದು ಮತ್ತು ಇತರರಿಗೆ ಸ್ಫೂರ್ತಿ ತುಂಬುವುದು ಇವರ ವೃತ್ತಿಜೀವನದ ಆದರ್ಶಗಳಾಗಿವೆ.
ಶುಭಮ್ ಇವರು ಕೇವಲ 26 ವರ್ಷದ ವಯಸ್ಸಿನವರು. ಆದರೂ ಇವರು ಮಾಡಿದ ಸಾಧನೆ ಎಲ್ಲರಿಗೂ ಮಾದರಿಯಾಗಿರುವಂತದ್ದು ಏಕೆಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ 5000 ಕಿ.ಮೀ ನಡಿಗೆಯನ್ನು ಕೇವಲ 180 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ.
ಇದಲ್ಲದೆ 105 ದಿನಗಳಲ್ಲಿ 6,000 ಕಿ.ಮೀ ಪರ್ವತ ಸೈಕ್ಲಿಂಗ್ ದೂರವನ್ನು ಕ್ರಮಿಸಿದ್ದು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಡೀ ಹಿಮಾಲಯದಲ್ಲಿ ಏಕವ್ಯಕ್ತಿ ಸೈಕ್ಲಿಂಗ್ ಮಾಡುತ್ತಾರೆ. ಇದೆಲ್ಲವನ್ನು ಪ್ರಾರಂಭಿಸುವುದಕ್ಕಾಗಿ ಇವರು 55 ದಿನಗಳಲ್ಲಿ 3,200 ಕಿ.ಮೀ ದೂರದಲ್ಲಿನ ಅಹಮದಾಬಾದ್ನಿಂದ ಕನ್ಯಾಕುಮಾರಿಗೆ ಏಕವ್ಯಕ್ತಿ ಸೈಕ್ಲಿಂಗ್ ಮಾಡಿದ್ದರು. ಹೀಗೆ ಇವರ ಹೆಚ್ಚಿನ ದಂಡಯಾತ್ರೆಗಳು ಪರಿಸರ ಸುಸ್ಥಿರತೆಯ ಅರಿವು ಮತ್ತು ಸರಳ ಜೀವನದ ಸುತ್ತ ಸುತ್ತುತ್ತಿರುವುದನ್ನು ಗಮನಿಸಬಹುದಾಗಿದೆ.
ಕೆಲವು ದಿನಗಳವರೆಗೆ 5000 ಕಿ.ಮೀ, 180 ದಿನಗಳು, 56 ಗುಳ್ಳೆಗಳು, 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು, ನಾಲ್ಕು ಜೋಡಿ ಪಾದರಕ್ಷೆಗಳು, 3 ಜೋಡಿ ಬಟ್ಟೆಗಳು ಮತ್ತು ಒಂದು ಬೆನ್ನುಹೊರೆಯೇ ಇವರ ಜೀವನವಾಗಿತ್ತು. ಆದರೆ ಇವರ ನಿಜವಾದ ಪ್ರಯಾಣ ಕಾಶ್ಮೀರದಿಂದ ಕನ್ಯಾಕುಮಾರಿ ಏಕವ್ಯಕ್ತಿ ನಡಿಗೆ ದಂಡಯಾತ್ರೆಯಲ್ಲಿರುವಾಗ ಪ್ರಾರಂಭವಾಗಿದ್ದು. ಈ ಒಂಟಿ ನಡಿಗೆಯಲ್ಲಿ ಪರ್ವತಗಳು ಮತ್ತು ಸಾಂತ್ವನವು ಇವರ ಉತ್ತಮ ಸಹಚರರು!
ನೀವುಇದನ್ನುಇಷ್ಟಪಡಬಹುದು: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಪಯಣ ಮಾಡಿದ ಅಪರೂಪದ ಟ್ರಾವೆಲರ್ ಕುಮಾರ್ ಶಾ
ಇದು ಎಂದಿಗೂ ಪ್ರಸಿದ್ಧಿಯಾಗುವ ಬಗ್ಗೆ ಇರಲಿಲ್ಲ!
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಈ ಪ್ರಯಾಣವು ಎಂದಿಗೂ ನಂಬಲಾಗದಷ್ಟು ದೂರ ನಡೆದು ಹೋಗುವುದು. ಶುಭಮ್ ಇಷ್ಟು ಕಿ.ಮೀ.ಗಳನ್ನು ಕ್ರಮಿಸುವುದು ಅಥವಾ ದಾಖಲೆ ನಿರ್ಮಿಸುವುದು ಎಂಬುದರ ಬಗ್ಗೆ ಇರಲಿಲ್ಲ. ಅನುಭವಗಳು, ಕಥೆಗಳು ಮತ್ತು ಪ್ರೀತಿಗಾಗಿ ಶುಭಮ್ ಸ್ವಲ್ಪ ನಿದ್ರೆಯನ್ನು ತ್ಯಜಿಸಿರಬಹುದು. ಆದರೆ ಇದೆಲ್ಲವೂ ಏಕಾಂಗಿಯಾಗಿ ನಡೆಯುವ ಹಿಂದಿನ ಪ್ರೇರಣೆಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಶುಭಮ್.
ಛಾಯಾಚಿತ್ರಗಳು ಕೇವಲ ನೆನಪಿನ ಜಾಡು, ವಾಸ್ತವವಲ್ಲ…
ಶುಭಮ್ ಮಟ್ಟಿಗೆ, ಪ್ರಯಾಣವು ಒಂದು ಪ್ರಮುಖ ಉದ್ಯೋಗವಾಗಿದೆ. ಇಡೀ ಜಗತ್ತು ತಮ್ಮ ಪಾತ್ರಗಳನ್ನು ನಿರ್ವಹಿಸುವಲ್ಲಿ ನಿರತರಾಗಿರುವಾಗ, ಒಬ್ಬ ಪ್ರಯಾಣಿಕನು ಅದರ ಭಾಗವಾಗಿರುವಾಗ ಮೂರನೆಯ ವ್ಯಕ್ತಿಯಂತೆ ಎಲ್ಲವನ್ನೂ ಗಮನಿಸುತ್ತಾನೆ.
ಕಥೆಗಾರನಿಗಿಂತ ಕಥೆ ಕೇಳುವವನಾಗಿರುವುದು ಹೆಚ್ಚು ಮುಖ್ಯ. ಸಾವಿರಾರು ಜನರು ಒಂದೇ ಕೆಲಸವನ್ನು ಮಾಡುವಾಗ, ಒಂದೇ ಚಲನಚಿತ್ರವನ್ನು ವೀಕ್ಷಿಸುವಾಗ, ಒಂದೇ ಪುಸ್ತಕವನ್ನು ಓದುವಾಗ – ಯಾವುದೇ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಒಂದೇ ರೀತಿಯ ಅನುಭವಗಳು ಇರುವುದಿಲ್ಲ.
ಹೆಪ್ಪುಗಟ್ಟುವ ಅನುಭವಗಳು
ಪ್ರತಿದಿನ ಜನರು ಹೆಚ್ಚಾಗಿ ಒಂದೇ ತರಹದ ಜೀವನಶೈಲಿಯನ್ನು ಮೆಚ್ಚುತ್ತಾರೆ. ಆದರೆ ಪ್ರಯಾಣದಲ್ಲಿ ಇದೆಲ್ಲಾ ಅಸಾಧ್ಯ. ಅಲ್ಲಿ ಕ್ಷಣಕ್ಕೊಮ್ಮೆ ಹೊಸ ಮಜಲು, ಸವಾಲು, ವಾತಾವರಣ, ಮಾನಸಿಕ ಸಮತೋಲನ ಏರುಪೇರಾಗುತ್ತಲೇ ಇರುತ್ತದೆ. ಅನಾನುಕೂಲ ಸ್ಥಳಗಳಲ್ಲಿ ನಿದ್ದೆ, ಊಟವಿಲ್ಲದೆ ಕಳೆದ ದಿನಗಳ ಲೆಕ್ಕವೇ ಹೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ಶುಭಮ್ ಹಾಕಿರುವ ತಂಪಾದ ಫೋಟೋಗಳ ಹಿಂದೆ ಸಾವಿರಾರು ಸವಾಲುಗಳಿವೆ. ಆದರೆ ಇದೆಲ್ಲವೂ ಒಂದು ಅನುಭವ, ಇದೆಲ್ಲವೂ ಯೋಗ್ಯ ಎನ್ನುತ್ತಾರೆ ಶುಭಮ್.
ಮೂಳೆಯನ್ನು ಹೆಪ್ಪುಗಟ್ಟುವ -5 ° C ಚಳಿಯನ್ನು, ಚರ್ಮವನ್ನು ಸುಡುವ 45 ° C ಧಗೆಯನ್ನು, ಎರಡು ಬಗೆಯ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಪ್ರತಿದಿನದ ಪ್ರಯಾಣದಲ್ಲಿ ಅಚ್ಚರಿಯಿತ್ತು. ಏಕೆಂದರೆ ಶುಭಮ್ ಅನೇಕ ಕುಟುಂಬಗಳೊಂದಿಗೆ ಉಳಿದುಕೊಂಡರು. ಎಂದಿಗೂ ರುಚಿ ನೋಡದ ಆಹಾರವನ್ನು ರುಚಿ ನೋಡಿದರು. ಹಿಂದೆಂದೂ ಇಲ್ಲದಂತಹ ಸ್ಥಳಗಳಿಗೆ ಭೇಟಿ ನೀಡಿದರು. ಕಥೆಗಳನ್ನು ಕೇಳಿದರು ಮತ್ತು ಈ ಪ್ರಕ್ರಿಯೆಯಲ್ಲಿ, ಇವರು ತಮ್ಮನ್ನ ತಾವೇ ಕಲ್ಪಿಸಿಕೊಳ್ಳಲಾಗದ ಪ್ರಯಾಣಿಕನನ್ನಾಗಿ ಬದಲಾಯಿಸಿಕೊಂಡಿದ್ದರು.
ವಾಸ್ತವವಾಗಿ, ಪ್ರಯಾಣವು ನಮ್ಮನ್ನು ಬದಲಾಯಿಸುತ್ತದೆ. ಅದನ್ನೆ ಶುಭಮ್ ಅವರ ಸಾಲುಗಳಲ್ಲಿ ಹೇಳುವುದಾದರೆ; “ಹೊರಗೆ ಹೋಗೋಣ! ಅದು ಲಡಾಕ್ ಅಥವಾ ಪ್ಯಾರಿಸ್ ಆಗಿರಬೇಕಾಗಿಲ್ಲ! ಪ್ರಯಾಣವು ಹತ್ತಿರದ ಚಹಾದಂಗಡಿಗೆ ಹೋಗಿ ಮಾತನಾಡಬಹುದು ಮತ್ತು ಹೊಸ ಕಥೆಗಳನ್ನು ಕೇಳಬಹುದು ಅಥವಾ ನೀವು ಎಂದಿಗೂ ಭೇಟಿಯಾಗದ ನೆರೆಹೊರೆಯವರೊಂದಿಗೆ ಭೇಟಿಯಾಗಬಹುದು”.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ