ನಮ್ಮೂರ ತಿಂಡಿವಿಂಗಡಿಸದ

ಉತ್ತರ ಕನ್ನಡದಲ್ಲಿದೆ ಕದಂಬರ ಪ್ರಾಚೀನ ರಾಜಧಾನಿಯಾಗಿದ್ದ ಬನವಾಸಿ

ಶಾಲಾ ದಿನಗಳಲ್ಲಿ (School days )ಇರುವಾಗ ನವೆಂಬರ್ ಡಿಸೆಂಬರ್  ಬಂತೆಂದರೆ ಶೈಕ್ಷಣಿಕ ಪ್ರವಾಸಕ್ಕೆ (Educational trip)ಹೋಗುತ್ತೇವೆ ಎಂಬ ಹುರುಪು. ಹಣವನ್ನೆಲ್ಲ ಪ್ರವಾಸಕ್ಕಾಗಿ ಕೂಡಿಡುತ್ತಿದ್ದೆವು. ಪ್ರತಿ ವರ್ಷದಂತೆ ಆ ವರ್ಷವೂ ಪ್ರವಾಸಕ್ಕೆ ಹೋಗುವ ತಯಾರಿ ಜೋರಾಗೆ ನಡೆದಿತ್ತು. ಅಂತೂ ಇಂತೂ ಪ್ರವಾಸಕ್ಕೆ ಹೋಗುವ ದಿನ ಬಂತು, ಎಲ್ಲರೂ ಬೆಳಿಗ್ಗೆ ಬೇಗ ಶಾಲೆಗೆ ಹೋಗಿ ಬಸ್ ಹತ್ತಿ ಶೈಕ್ಷಣಿಕ ಪ್ರವಾಸಕ್ಕೆ ಜಯವಾಗಲಿ ಎಂದು ಕೂಗುತ್ತಾ ಪಯಣವನ್ನು ಆರಂಭಿಸಿದೆವು.

ಕೆ. ಎಂ ಪವಿತ್ರಾ

ಬಸ್ ನಲ್ಲಿ ಸಂಗೀತಾ ಕಛೇರಿ, ಡಾನ್ಸ್, ಹರಟೆ ಹೀಗೆ ಮೋಜು ಮಸ್ತಿ ಮಾಡುತ್ತ ಹೋಗಿದ್ದು ಉತ್ತರ ಕನ್ನಡ ( Uttara kannada ) ಜಿಲ್ಲೆಯ ಬನವಾಸಿಗೆ (Banavasi Madhukeshwara Temple) ಸುಮಾರು 10 ಗಂಟೆಯ ಹಾಗೆ ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ನಂತರ ಬನವಾಸಿ ( Banavasi)  ಗೆ ಹೋದೆವು.

     ಬನವಾಸಿಯು ( Banavasi)  ಕದಂಬರ ( Kadamba) ಪ್ರಾಚೀನ ರಾಜಧಾನಿಯಾಗಿತ್ತು. ಇದು ಕನ್ನಡ ಮತ್ತು ಕರ್ನಾಟಕವನ್ನು ಪ್ರಾಮುಖ್ಯತೆಗೆ ತಂದ ಮೊದಲ ಸ್ಥಳೀಯ ಸಾಮ್ರಾಜ್ಯ. 5 ನೇ ಶತಮಾನದಲ್ಲಿ ನಿರ್ಮಿಸಲಾದ ಮಧುಕೇಶ್ವರ ದೇವಾಲಯದ ಸುತ್ತಲೂ ಬೆಳೆದಿದೆ ಮತ್ತು ಹಿಂದೂ ಧರ್ಮದ ಪ್ರಮುಖ ಶಾಖೆಯಾದ ಶೈವ ಧರ್ಮದ ಸರ್ವೋಚ್ಚ ದೇವರಾದ ಶಿವನಿಗೆ   ಈ ದೇವಾಲಯವನ್ನು ಸಮರ್ಪಿಸಲಾಗಿದೆ .ಅಲ್ಲಿನ ಮಧುಕೇಶ್ವರ ( Madhukeshwara temple ) ದೇವಸ್ಥಾನವು .ಶಿವನಿಗೆ (Lord shiva ) ಅರ್ಪಿತವಾದ ಮಧುಕೇಶ್ವರ ದೇವಾಲಯವನ್ನು ಕದಂಬ ( Kadamba dynasty) ರಾಜವಂಶದ ಮಯೂರ ಶರ್ಮಾ 9 ನೇ ಶತಮಾನದಲ್ಲಿ ನಿರ್ಮಿಸಿದ ಶಿವಲಿಂಗವು ಜೇನು ಬಣ್ಣದಲ್ಲಿದೆ ಮತ್ತು ಕನ್ನಡದಲ್ಲಿ “ಮಧು” ಎಂದರೆ ಜೇನು, ಆದ್ದರಿಂದ ಮಧುಕೇಶ್ವರ ಎಂಬ ಹೆಸರು, ನಿರ್ದಿಷ್ಟ ಶೈಲಿಯನ್ನು ಅನುಸರಿಸುವ ಹೆಚ್ಚಿನ ದೇವಾಲಯಗಳಿಗಿಂತ ಭಿನ್ನವಾಗಿದೆ.

ಈ ದೇವಾಲಯವು ಯಾವುದೇ ನಿರ್ದಿಷ್ಟ ವಾಸ್ತುಶೈಲಿಯನ್ನು ವಿಚಲಿತಗೊಳಿಸುವುದಿಲ್ಲ. ನಿಯಮ ಬದಲಾವಣೆಯಿಂದ ದೇವಸ್ಥಾನ ಹಲವು ಬದಲಾವಣೆಗಳಿಗೆ ಒಳಗಾಗಿದೆಯಂತೆ.

ಇದರ ಜೊತೆಗೆ, ನಾವು ಪಾರ್ವತಿ, ನರಸಿಂಹ, ವೀರಭದ್ರ ಮತ್ತು ಬಸವಲಿಂಗ ದೇವಾಲಯಗಳನ್ನು ಸಹ ಗಮನಿಸಿದೆವು.ಬನವಾಸಿ ಮಿಶ್ರ ಅನುಭವವನ್ನು ನೀಡುತ್ತದೆ, ಆಧ್ಯಾತ್ಮಿಕ ಪುನರ್ಯೌವನಗೊಳಿಸುವಿಕೆ ಮತ್ತು ನೈಸರ್ಗಿಕ ವಿಹಾರದ ಪರಿಪೂರ್ಣ ಮಿಶ್ರಣವಾಗಿದೆ.

ನೀವು ಇದನ್ನು ಓದಬಹುದು : ಸೊಕ್ಕಿದ್ರೆ ಯಾಣಕ್ಕೆ ಹೋಗು, ರೊಕ್ಕ ಇದ್ರೆ ಗೋಕರ್ಣಕ್ಕೆ ಹೋಗು; ಪವಿತ್ರಾ ಕೆ. ಎಂ. ಬರೆದ ಯಾಣ ಸುತ್ತಿದ ಕಥೆ

    ಹೀಗೆ ಹಲವಾರು ವಿಷಯಗಳನ್ನು ಶಿಕ್ಷಕರಿಂದ ಮತ್ತು ಅಲ್ಲಿಯ ಅರ್ಚಕರು ಹಾಗೂ ಸ್ಥಳೀಯರಿಂದ ತಿಳಿದುಕೊಂಡೆವು..ಇನ್ನು ಈ ಊರಿನಲ್ಲಿ  ಗೋದಿ, ಕಬ್ಬು, ಅಡಿಕೆ, ಭತ್ತ ವಿಶೇಷ ವಾಗಿ ಅನಾನಸ್ ಹಣ್ಣು, ಶುಂಠಿ, ಬಾಳೆಹಣ್ಣು ಗಳನ್ನು ಹೇರಾಳವಾಗಿ ಬೆಳೆಯಲಾಗುತ್ತದೆ.ಸುತ್ತಲೂ ವರದಾ ನದಿಯು ಮೂರು ಕಡೆ ಹರಿಯುತ್ತದೆ. ಶಿರಸಿಯು 23 ಕಿಮೀ ದೂರದಲ್ಲಿರುವ ಹತ್ತಿರದ ಪಟ್ಟಣವಾಗಿದೆ. ಇದು ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿದೆ . ಹತ್ತಿರದ ರೈಲು ನಿಲ್ದಾಣಗಳು ಹಾವೇರಿ ಮತ್ತು ತಾಳಗುಪ್ಪದಲ್ಲಿ 70 ಕಿಮೀ ದೂರದಲ್ಲಿದೆ.

ಪಟ್ಟಣವು ಪ್ರಸಿದ್ಧವಾಗಿರುವ ಹಲವಾರು ಅನಾನಸ್ ತೋಟಗಳನ್ನು ಅನ್ವೇಷಿಸಲು ಯೋಗ್ಯವಾಗಿದೆ.ಬನವಾಸಿಯ ಹತ್ತಿರ  ಪ್ರವಾಸಿ ತಾಣಗಳು ಹಲವಾರು ಇದೆ.

ಗುಡ್ನಾಪುರ ( Gudnapura), ಸಿರ್ಸಿ ( Shirasi) , ಸೋದೆ  (Sode), ಹರಿಹರ( Harihar) , ಜೋಗ ಜಲಪಾತ ( jog falls) , ಬಳ್ಳಿಗಾವಿ (balligavi), ಕೋಟಿಪುರ (kotipura)  ಬನವಾಸಿಯ ಕೆಲವು ಆಕರ್ಷಣೆಗಳು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button